ಇಂದು ಎನಗೆ ಗೋವಿಂದ
ಮಂತ್ರಾಲಯ ಮಹಾತ್ಮೆ ಪಿ. ಬಿ. ಶ್ರೀನಿವಾಸ್
ಶ್ರೀ ರಾಘವೇಂದ್ರ ಸ್ವಾಮಿಗಳು
ರಾಜನ್-ನಾಗೇಂದ್ರ
ಇಂದು ಎನಗೆ ಗೋವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೆ.. ಮುಕುಂದನೇ..
ಸುಂದರ ವದನನೆ ಆನಂದ ಇಂದಿರಾ ರಮಣಾ...|| ಪ ||
ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನೆಂತೆನ್ನ ಕುಂದುಗಳ ಎಣಿಸದೆ
ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ|| ೧ ||
ಧಾರುಣಿಯೊಳು ಬಲುಭಾರ ಜೀವನವಾಗಿ
ದಾರಿ ತಪ್ಪಿ ನಡೆದೆ ಸೇರಿದೆ ಕುಜನರಾ
ಯಾರೂ ಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೊ ಹರಿಯೆ..|| ೨ ||
ಮಂತ್ರಾಲಯ ಮಹಾತ್ಮೆ
ಚಿತ್ರ ನೋಡಿ